Veeraiah Hiremath

ಮ್ಯಾರಥಾನ್ ಕ್ರೀಡಾಪಟು, ಮೂಲತಃ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆಯ, ಮಸ್ಕಿ ತಾಲೂಕಿನ ತಿಮ್ಮಾಪುರ ಗ್ರಾಮದವರು, ಮ್ಯಾರಥಾನ್ ಕ್ರೀಡೆಗಾಗಿಯೇ 2007ಕ್ಕೆ ಬೆಂಗಳೂರಿಗೆ ಬಂದಿದ್ದು 2010 ರಿಂದ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ.

ಇವರು 3ಕಿಮೀ, 5ಕಿಮೀ, 10ಕಿಮೀ, 21.195ಕಿಮೀ, ಮತ್ತು 42.195ಕಿಮೀ¸ ಸೇರಿದಂತೆ 27 ಕ್ಕೂ ಹೆಚ್ಚಿನ ರೇಸ್ಗಳನ್ನು ಓಡಿದ್ದಾರೆ. ಡಿಸೆಂಬರ್ 26, 2010 ರಂದು ಸಬರಮತಿಯಲ್ಲಿ (ಅಹಮದಾಬಾದ್, ಗುಜರಾತ್) ನಡೆದ ಮ್ಯಾರಥಾನ್ 42.195ಕಿಮೀ ದೂರವನ್ನು 2 ತಾಸು 41ನಿಮಿಷ 32ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.

Making a Difference Together

Empowering Communities, Inspiring Change

Veeraiah Hiremath

ವೀರಯ್ಯ ಹಿರೇಮಠ ಅವರು ಹಲವಾರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಎಲ್ಲಾ ಸಮುದಾಯಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. 

ಅವರು ಹಲವಾರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದಾರೆ, ಅಗತ್ಯವಿರುವವರಿಗೆ ವೈದ್ಯಕೀಯ ನೆರವು ಮತ್ತು ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ. ಹೆಚ್ಚುವರಿಯಾಗಿ, ಅವರು ಉಚಿತವಾಗಿ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ನಡೆಸಿ 90 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ, ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಅಗತ್ಯ ಬಂದಾಗ ಯಾವುದೇ ದೇಶ ಭಾಷೆ ಎನ್ನದೆ ಎಲ್ಲಾ ಜನಾಂಗದ ಮತ್ತು ಎಲ್ಲಾ ಭಾಷೆಯವರ ಒಳಿತಿಗಾಗಿ ಹೋರಾಡುತ್ತಾ ಬಂದಿದ್ದಾರೆ. 

ವೀರಯ್ಯ ಹಿರೇಮಠ ಅವರು ರಕ್ತದಾನ ಶಿಬಿರಗಳನ್ನು ಸಕ್ರಿಯವಾಗಿ ಆಯೋಜಿಸುತ್ತಾ ಬಂದಿದ್ದಾರೆ, ಜೀವಗಳನ್ನು ಉಳಿಸಲು ಸ್ವಯಂಪ್ರೇರಿತ ರಕ್ತದಾನದ ಮಹತ್ವವನ್ನು ಒತ್ತಿಹೇಳಿದ್ದಾರೆ. 

ಪರಿಸರ ಸಂರಕ್ಷಣೆಯ ಮಹತ್ವವನ್ನು ಮನಗಂಡು, ಅವರು ನೆಲೆಸಿರುವ ವಾರ್ಡ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ಮತ್ತು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ ಗುರಿಯೊಂದಿಗೆ “ಕ್ಲೀನ್ ಸಿಟಿ ಅಂಡ್ ಗ್ರೀನ್ ಸಿಟಿ” ಎಂಬ ಧ್ಯೇಯದೊಂದಿಗೆ ಕಾರ್ಯ ತತ್ಪರರಾಗಿದ್ದಾರೆ 

ಈ ಎಲ್ಲಾ ಪ್ರಯತ್ನಗಳ ಮೂಲಕ ವೀರಯ್ಯ ಹಿರೇಮಠರು ಸಮಾಜದ ಸ್ವಾಸ್ಥ್ಯವನ್ನು ಸುಧಾರಿಸಲು ಮತ್ತು ಸಕಾರಾತ್ಮಕ ಬದಲಾವಣೆಯನ್ನು ಉತ್ತೇಜಿಸಲು ತಮ್ಮನ್ನು ತಾವು ಈ ನಾಡಿಗೆ ಸಮರ್ಪಿಸಿಕೊಂಡಿದ್ದಾರೆ. ಶ್ರೀಯುತರು ಅವಿವಾಹಿತರಾಗಿದ್ದು, ಹಣ ಮಾಡುವುದರತ್ತ ಮನಗೊಡದೇ ಸಾಮಾಜಿಕ ಕಳಕಳಿ ಹೊಂದಿರುತ್ತಾರೆ ಎಂಬುದು ಅತಿ ವಿಶೇಷ.

ದೂರ ದೃಷ್ಟಿ

ಸಹಾನುಭೂತಿ, ಕ್ರಿಯೆ ಮತ್ತು ಸಮುದಾಯದ ಸಬಲೀಕರಣದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸುವುದು.

ಮಿಷನ್

ಜೀವನವನ್ನು ಮೇಲಕ್ಕೆತ್ತಲು, ಸಾಮಾಜಿಕ ಬದಲಾವಣೆಯನ್ನು ಪ್ರಚೋದಿಸಲು ಮತ್ತು ಶಾಶ್ವತವಾದ ಧನಾತ್ಮಕ ಪರಿಣಾಮವನ್ನು ಬಿಡಲು

ವೀರಯ್ಯ ಹಿರೇಮಠ್ ರವರ

ಸಾಧನೆಗಳು

  1. 9ನೇ ಫೆಬ್ರವರಿ 2013, “ರಾಣಿ ಅಬ್ಬಕ್ಕ ಹಾಫ್ ಮ್ಯಾರಥಾನ್, ಉಲ್ಲಾಳ” ಮಂಗಳೂರು.
  2. ಮಾರ್ಚ್ 2012, “ಮಾವನ ಶುಗರ್ಸ್ ಇಂಡಿಯನ್ ಓಪನ್ ಮ್ಯಾರಥಾನ್”, ನವದೆಹಲಿ.
  3. 26 ಡಿಸೆಂಬರ್ 2010, “ಸಬರಮತಿ ಅಂತರಾಷ್ಟ್ರೀಯ ಮ್ಯಾರಥಾನ್”(ಅಹಮದಾಬಾದ್,ಗುಜರಾತ್)
  4. 31 ಜನವರಿ 2010, “ಎನ್ ಆರ್ ಸಿ ಅಥ್ಲೆಟಿಕ್ ಮೀಟ್” ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ.
  5. 28ನೇ ಫೆಬ್ರವರಿ 2010, “ಸಿಂಡಿಕೇಟ್ ಬ್ಯಾಂಕ್, ಉಡುಪಿ ಮ್ಯಾರಥಾನ್.”
  6. 21ನೇ ಫೆಬ್ರವರಿ 2010, “8ನೇ ಚೆನ್ನೈ ಮ್ಯಾರಥಾನ್.”
  7. 23ನೇ ಮೇ 2010, “ವರ್ಲ್ಡ್ 10K” ಬೆಂಗಳೂರು.
  8. 11ನೇ ಡಿಸೆಂಬರ್ 2010, “ಮಿಡ್ನೈಟ್ ಮ್ಯಾರಥಾನ್”, ಬೆಂಗಳೂರು.
  9. 30ನೇ ಆಗಸ್ಟ್ 2009, “ಹೈದರಾಬಾದ್ ಮ್ಯಾರಥಾನ್”.
  10. 8ನೇ ಮಾರ್ಚ್ ಮತ್ತು 2ನೇ ಆಗಸ್ಟ್ 2009, “ಫೀಟ್ ಆನ್ ದ ಸ್ಟ್ರೀಟ್”, ಬೆಂಗಳೂರು.
  11. 26ನೇ ಸೆಪ್ಟೆಂಬರ್ 2006, “ವೈದೇಹಿ & ಮಲ್ಯ ಹಾರ್ಟ್ 10ಕಿ.ಮೀ’’ ಬೆಂಗಳೂರು ರನ್,
  12. 28ನೇ ಅಕ್ಟೋಬರ್ 2006, “ತಿಪಟೂರ್ ಸ್ಪೋರ್ಟ್ಸ್ ಕ್ರಾಸ್ ಕಂಟ್ರಿ”.
  13. 27ನೇ ನವೆಂಬರ್ 2009, “ಕೊಡಗು ಕಾವೇರಿ ಮ್ಯಾರಥಾನ್.”
  14. 2008 ಮತ್ತು 2009, ಸರಕಾರಿ ವಿಜ್ಞಾನ ಕಾಲೇಜು “ವಾರ್ಷಿಕ ಕ್ರೀಡಾಕೂಟ” (10ಕಿ.ಮೀ), ನೃಫತುಂಗ ರಸ್ತೆ, ಬೆಂಗಳೂರು.
  15. 20ನೇ ಏಪ್ರೀಲ್ 2008, ಅತ್ತಿಬೆಲೆ, ಬೆಂಗಳೂರು ನಗರ, “ಪಟ್ಟಾಲಮ್ಮ ಕ್ರಾಸ್ ಕಂಟ್ರಿ”.
  16. 5ನೇ ಅಕ್ಟೋಬರ್ 2005, “5ನೇ ಮೈಸೂರು ದಸರಾ ಹಾಫ್ ಮ್ಯಾರಥಾನ್.”
  17. 30ನೇ ನವೆಂಬರ್ 2008, “ಕಾವೇರಿ ಮ್ಯಾರಥಾನ್.”
  18. 28ನೇ ಡಿಸೆಂಬರ್ 2008, “ಮಾವನ ಶುಗರ್ಸ್ ಇಂಡಿಯನ್ ಓಪನ್ ಮ್ಯಾರಥಾನ್” ನವದೆಹಲಿ.
  19. 12ನೇ ಡಿಸೆಂಬರ್ 2009, “ಮಿಡ್ನೆಟ್ ಮ್ಯಾರಥಾನ್” ಬೆಂಗಳೂರು.
  20. 2007-2008, “ನೇತಾಜಿ ಮರ್ಸೂರ್ ಆನೇಕಲ್ ತಾಲೂಕು ಮ್ಯಾರಥಾನ್”.
  21. ಸರಕಾರಿ ವಿಜ್ಞಾನ ಕಾಲೇಜು “ವಾರ್ಷಿಕ ಕ್ರೀಡಾಕೂಟ” 2007 ಮತ್ತು 2008’’, ನೃಫತುಂಗ ರಸ್ತೆ, ಬೆಂಗಳೂರು.
  22. 25ನೇ ಫೆಬ್ರವರಿ 2007, “ಪ್ರೀಮಿಯರ್ ಸಿಟಿಜನ್ ಹಾಫ್ ಮ್ಯಾರಥಾನ್”, ಧಾರವಾಡ.
  23. 22ನೇ, 23ನೇ, 24ನೇ ಆಗಸ್ಟ್ 2007, “ಸಿಂಡಿಕೇಟ್ ಬ್ಯಾಂಕ್ ಕರ್ನಾಟಕ ರಾಜ್ಯ ಹಿರಿಯ ಮತ್ತು ಕಿರಿಯರ ಅಥ್ಲೆಟಿಕ್ ಚಾಂಪಿಯನ್ಶಿಪ್” ಬೆಂಗಳೂರು.
  24. 6ನೇ ಡಿಸೆಂಬರ್ 2007, “BSNL ಬೆಂಗಳೂರು ಅಂತರಾಷ್ಟ್ರೀಯ ಹಾಫ್ ಮ್ಯಾರಥಾನ್”, ಕಂಠೀರವ ಸ್ಟೇಡಿಯಂ.
  25. 22ನೇ ಡಿಸೆಂಬರ್ 2007, “ಅನೇಕಲ್ ಕ್ರಾಸ್ ಕಂಟ್ರಿ”.
  26. 2007, “ರಾಷ್ಟ್ರೀಯ ಕ್ರೀಡಾ ದಿನ” ಬೆಂಗಳೂರು.
  27. 5ನೇ ಮತ್ತು 6ನೇ ಫೆಬ್ರವರಿ 2006-2007, “JSS ವಾರ್ಷಿಕ ಕ್ರೀಡಾಕೂಟ” ಧಾರವಾಡ.
ಅವರ ಸಮಾಜಮುಖಿ ಕೆಲಸಗಳು ಈ ಕೆಳಗಿನಂತಿವೆ.
ನಾಯಕತ್ವದ ಗುಣ
  1. 2010 ರಲ್ಲಿ, ನಾನು ಸರ್ಕಾರಿ ವಿಜ್ಞಾನ ಕಾಲೇಜು, ನೃಪತುಂಗ ರಸ್ತೆ, ಬೆಂಗಳೂರು 560001 ರ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದೆ.
  2. ನಾನು 2010 ರಲ್ಲಿ ಬೆಂಗಳೂರಿನ ಎನ್ ಟಿ ರಸ್ತೆಯಲ್ಲಿರುವ ಸರಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಂತಹ ವಿಭಾಗಗಳಲ್ಲಿ ಜರ್ನಲ್ಗಳಿಗೆ ಸಹಿ ಹಾಕಲು ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸುವುದನ್ನು ಯಶಸ್ವಿಯಾಗಿ ನಿಲ್ಲಿಸಿದೆ.
  3. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ತುಷಾರಾಗಿರಿನಾಥ್ ಇವರ ಸಹಯೋಗದೊಂದಿಗೆ ಮಾಜಿ ಕಾರ್ಪೊರೇಟರ್ ಶ್ರೀ ಗೋಪಿ ರವರು ನೀಡಿದ ಹಣವನ್ನು ನಮ್ಮ ಸರಕಾರಿ ವಿಜ್ಞಾನ ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಿಂದ ವಿದ್ಯಾರ್ಥಿಗಳಿಗೆ ಯಶಸ್ವಿಯಾಗಿ ಕೊಡಿಸಲಾಯಿತು.
  4. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ನಾಟಕ ಮತ್ತು ಇನ್ನಿತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಟೀ ಕೂಟ ಏರ್ಪಡಿಸುವುದರೊಂದಿಗೆ ಅವರನ್ನು ಗೌರವಿಸಿ ಸನ್ಮಾನಿಸಲಾಗುತ್ತಿತ್ತು.
  5. 2010ರಲ್ಲಿ ಕಾಲೇಜಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಎಂ.ಎಸ್.ಸಿ(M.Sc) ವಿದ್ಯಾರ್ಥಿನಿಗೆ ನಮ್ಮ ಸರಕಾರಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕರ ಗಮನಕ್ಕೆ ತಂದು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಹಾಯದಿಂದ ಅಂದಾಜು 90,000 ವ್ಯಯಗೊಳಿಸಿ. ಕ್ಯಾನ್ಸರ್ ಚಿಕಿತ್ಸೆಯೂ ಯಶಸ್ವಿಯಾಗುವಂತೆ ನೋಡಿಕೊಳ್ಳಲಾಯಿತು.
  6. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗ ಮತ್ತು ವಿಜ್ಞಾನ ಪರಿಷತ್ತಿನ ಸಹಯೋಗದಲ್ಲಿ ವಿಜ್ಞಾನ ದಿನಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
  7. ಬೆಂಗಳೂರು ವಿಶ್ವವಿದ್ಯಾನಿಲಯ ಮತ್ತು ಗುಲ್ಬರ್ಗ ವಿವಿ ಅಂತರ ಕಾಲೇಜು ಕ್ರೀಡಾಕೂಟದ ಮುಖ್ಯ ಅತಿಥಿಯಾಗಿದ್ದೆ.
ಗೌರವ ಮತ್ತು ಪ್ರಶಸ್ತಿಗಳು
  • ಸಾಮಾಜಿಕ ಚಟುವಟಿಕೆಗಳಿಗಾಗಿ ಈಗಿನ ಸಚಿವರಾದ ಶ್ರೀ ಕೃಷ್ಣಪ್ಪ ರವರು( ಬೆಂಗಳೂರು) ಮತ್ತು ಶಾಸಕರಾದ ಶ್ರೀ ಪ್ರಿಯಾ ಕೃಷ್ಣ, ಬೆಂಗಳೂರು ಇವರುಗಳಿಂದ ನಾಯಂಡ ಹಳ್ಳಿಯಲ್ಲಿ ಯುವಕರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಲಾಯಿತು .
  • ಶ್ರೀ ಸಿದ್ದಲಿಂಗೇಶ್ವರ ಕೈಂಕರ್ಯ ದಾಸೋಹ ಸಂಘ ಯಡಿಯೂರು ಇವರಿಂದ ಸನ್ಮಾನವನ್ನ ಸ್ವೀಕರಿಸಲಾಯಿತು.
  • 15 ದಿನಗಳ ಸಮಾಜ ಸೇವೆಗಾಗಿ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯ ಹುಬ್ಬಳ್ಳಿ ವಲಯದಿಂದ ಸನ್ಮಾನ.
  • ನನ್ನ ಸಾಮಾಜಿಕ ಚಟುವಟಿಕೆಗಳಿಗಾಗಿ ಸುಭಾಷ್ ಭರಣಿ ಅಭಿಮಾನಿಗಳ ಸಂಘದಿಂದ ಸನ್ಮಾನ.
  • ಸಾಮಾಜಿಕ ಮತ್ತು ಕ್ರೀಡಾ ಚಟುವಟಿಕೆಗಾಗಿ ಮುರುಘಾ ಮಠ ಚಿತ್ರದುರ್ಗದಿಂದ ಸನ್ಮಾನಿಸಲ್ಪಟ್ಟಿದೆ.
  • ಅಖಿಲ ಕರ್ನಾಟಕ ಶಿವರಾಜ್ ಕುಮಾರ್ ಕನ್ನಡ ಅಭಿಮಾನಿಗಳ ಸಂಘದಿಂದ ಸನ್ಮಾನ.
ಹವ್ಯಾಸಗಳು
  • ಧ್ಯಾನ ಮಾಡುವುದು, ಭಕ್ತಿಗೀತೆಗಳನ್ನು ಕೇಳುವುದು.
  • ಸಕಾರಾತ್ಮಕ ಚಿಂತನೆಗೆ ಸಂಬಂಧಿಸಿದ ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಓದುವುದು.
  • ಅಡುಗೆ ಮಾಡುವುದು.
  • ಬಿಡುವಿನ ವೇಳೆಯಲ್ಲಿ ಸಮಾಜಿಕ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಳ್ಳುವುದು.
ಬರಹಗಾರರಾಗಿ

ಇಲ್ಲಿಯವರೆಗೆ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ನಲ್ಲಿ 2000 ಕ್ಕೂ ಹೆಚ್ಚು ದಿನೋಕ್ತಿಗಳನ್ನು(Quotes) ಬರೆದಿದ್ದಾರೆ, ಪ್ರಸ್ತುತ ಅವರು ಬರೆದಿರುವ ಸ್ಪೋಕನ್ ಇಂಗ್ಲೀಷ್ ಪುಸ್ತಕವು ಪ್ರಕಟಣೆಯಾಗಬೇಕಾಗಿದೆ.

“ವೀರಯ್ಯ ಹಿರೇಮಠ” ಅವರ ವೈಯಕ್ತಿಕ ಮಾಹಿತಿ
Name:            Veeraiah Hiremath.
Father’s name: Rachaiah Hiremath.
Mother's name: Parvathamma.
Place of Birth: Thuravihal, Raichur District-584132
Date of Birth: 20th July 1978.
Gender: Male.
Marital Status: Single.
Languages Known: Kannada, English & Hindi.
Qualification: BSC, DIEC, DISE, HDIBC, (MSC II) (PGDELT).
Present Address: VEERAIAH HIREMATH,
#26, SAI Road Compound, Vinayaka Layout, Nayandahalli, Bangalore-560026.
Cell No: 9448387950.
E- Mail ID : veeraiah_hm@yahoo.com
Permanent Address: S/O Parvathamma Rachaiah Hiremath.
Thimmapur, Kannal (Post),
Maski, Raichur, Karnataka -584125.